ಜಮೀನು ವಿವಾದ: ಯುವಕನಿಗೆ ಚಾಕು ಇರಿತ
Posted by editor on in Category
08
49

ಕೆ.ಆರ್.ಪೇಟೆ: ಜಮೀನು ವಿವಾದ ಸಂಬಂಧ ಉಂಟಾದ ಜಗಳದ ವೇಳೆ ಯುವಕನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದೆ.
ಬೂಕನಕೆರೆ ಹೋಬಳಿಯ ಕೂಡಲಕುಪ್ಪೆ ಗ್ರಾಮದ ನಾಗೇಗೌಡರ ಪುತ್ರ ಗುರುಪ್ರಸಾದ್(28) ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಕರೀಗೌಡರ ಮಗ ಮಾಕೇಗೌಡ(45) ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಪತ್ನಿ ಕುಮಾರಿ ಹಾಗೂ ಪುತ್ರ ಶಿವಕುಮಾರ್ ನಾಪತ್ತೆಯಾಗಿದ್ದಾರೆ. ಜಗಳದ ವೇಳೆ ಮಾಕೇಗೌಡ ಗುರುಪ್ರಸಾದ್ ಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಗ್ರಾಮಸ್ಥರು ತಡೆದು ಕೃಷ್ಣರಾಜಪೇಟೆ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಕ್ಕೆ ಬಂದು ಪೊಲೀಸರು ಮಾಹಿತಿ ಪಡೆಯುವಾಗ ಮಾಕೇಗೌಡನ ಪತ್ನಿ ಹಾಗೂ ಪುತ್ರ ಶಿವಕುಮಾರ್ ಮನೆಗೆ ಹೋಗಿ ಬರುವುದಾಗಿ ಹಿಂಬಾಗಿಲಿನಿಂದ ತಪ್ಪಿಸಿಕೊಂಡಿದ್ದಾರೆ... ಕೃಷ್ಣರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್ಸ್ ಪೆಕ್ಟರ್ ಟಿ. ಲಕ್ಷ್ಮಣ್ ತನಿಖೆ ಕೈಗೊಂಡಿದ್ದಾರೆ.